ಬುದ್ಧದೇವ್ ದಾಸಗುಪ್ತಾ(ಜನನ:೧೯೩೩) ಇವರು ಪ್ರಸಿದ್ಧ ಸರೋದ್ ವಾದಕರು. ಇವರು ೧೯೩೩ರಲ್ಲಿ ಭಾಗಲ್ಪುರದಲ್ಲಿ ಜನಿಸಿದರು. ಇವರು ಸರೋದ್ ವಾದ್ಯದ ವಿಶಿಷ್ಟ ಘರಾಣೆಯಾದ ಸೇನಿ-ಷಹಜಹಾನಪುರ್ ಘರಾಣೆಯ ಸರೋದ್ ವಾದಕರು. ಇವರು ಪ್ರಸಿದ್ಧ ಸರೋದ್ ವಾದಕರಾಗಿದ್ದ ಪಂಡಿತ್ ರಾಧಿಕಾ ಮೋಹನ್ ಮೈತ್ರಾ ಇವರ ಬಳಿ ಸರೋದ್ ವಾದನದ ಶಿಕ್ಷಣವನ್ನು ಪಡೆದರು. ತಮ್ಮಹತ್ತನೇಯ ವಯಸ್ಸಿನಲ್ಲಿ ಸರೋದ ವಾದನವನ್ನು ಕಲಿಯಲು ಪ್ರಾರಂಭಿಸಿದ ಬುದ್ಧದೇವರು ದೀರ್ಘವಾದ ೩೮ವರ್ಷಗಳ ಕಾಲ ತಮ್ಮ ಗುರುಗಳ ಬಳಿ ಸರೋದ್ ವಾದನವನ್ನು ಕಲಿತರು, ಇದು ಯಾವುದೇ ಗುರು ತಮ್ಮ ಶಿಷ್ಯನಿಗೆ ನೀಡಿದ ಅತಿ ದೀರ್ಘಾವಧಿಯ ಶಿಕ್ಷಣವೆಂದೇ ಹೇಳಬಹುದು. == ಉಲ್ಲೇಖಗಳು ==